Site icon Housing News

ಬಸವ ವಸತಿ ಯೋಜನೆ 2022: ಆರ್‌ಜಿಆರ್‌ಎಚ್‌ಸಿಎಲ್‌ ಸ್ಕೀಮ್ ಅರ್ಜಿ ವಿಧಾನ, ರಾಜೀವ್ ಗಾಂಧಿ ವಸತಿ ನಿಗಮದ ಫಲಾನುಭವಿ ಪಟ್ಟಿ

All You Need To Know About Basava Vasati Yojana 2021

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜಗಳ ಕಲ್ಯಾಣಕ್ಕೆ ಹಲವು ಸ್ಕೀಮ್‌ಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿದೆ. ಕರ್ನಾಟಕದ ನಿರಾಶ್ರಿತರಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ, ರಾಜೀವ್‌ ಗಾಂಧಿ ಹೌಸಿಂಗ್ ಕಾರ್ಪೊರೇಶನ್ ಲಿಮಿಟೆಡ್‌ (ಆರ್‌ಜಿಎಚ್‌ಸಿಎಲ್) ಅನ್ನು ಸ್ಥಾಪಿಸಿದೆ. ಇದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಪಕ್ಕಾ ಮನೆಯನ್ನು ಒದಗಿಸುತ್ತದೆ. ಬಸವ ವಸತಿ ಯೋಜನೆಯನ್ನು ಆರ್‌ಜಿಎಚ್‌ಸಿಎಲ್‌ನಿಂದ ನಿರ್ವಹಿಸಲಾಗುತ್ತಿದ್ದು, ಇದು ಬಡವರಿಗೆ ಕೈಗೆಟಕುವ ದರದಲ್ಲಿ ಮನೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ.

Table of Contents

Toggle

ರಾಜ್ಯದಲ್ಲಿನ ಬಸವ ವಸತಿ ಯೋಜನೆ ಅಡಯಲ್ಲಿ, ರಾಜ್ಯ ಸರ್ಕಾರದಿಂದ ಮನೆ ನಿರ್ಮಾಣಕ್ಕೆ 80% ಕಚ್ಚಾ ಸಾಮಗ್ರಿಯನ್ನು ಅರ್ಜಿದಾರರು ಪಡೆಯುತ್ತಾರೆ. ಬಸವ ವಸತಿ ಯೋಜನೆಯನ್ನು ಆರ್‌ಜಿಆರ್‌ಎಚ್‌ಸಿಎಲ್ ಸ್ಕೀಮ್‌ ಎಂದೂ ಕರೆಯಲಾಗಿದ್ದು, ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಆರು ಕೈಗೆಟಕುವ ವಸತಿ ಸ್ಕೀಮ್‌ಗಳಲ್ಲಿ ಒಂದಾಗಿದೆ.

ಪಿಎಂಎವೈ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದನ್ನೂ ಓದಿ.

 

ಬಸವ ವಸತಿ ಯೋಜನೆ: ವಾಸ್ತವಾಂಶಗಳು

ಸ್ಕೀಮ್‌ ಬಸವ ವಸತಿ ಯೋಜನೆ
ಆರಂಭಿಸಿದ್ದು (ವರ್ಷ) 2000
ರಾಜ್ಯ ಕರ್ನಾಟಕ
ಸಂಸ್ಥೆ ಆರ್‌ಜಿಆರ್‌ಎಚ್‌ಸಿಎಲ್ (ರಾಜೀವ್ ಗಾಂಧಿ ಗ್ರಾಮೀಣ ಹೌಸಿಂಗ್ ಕಾರ್ಪೊರೇಶನ್‌ ಲಿಮಿಟೆಡ್‌)
ಅಧಿಕೃತ ವೆಬ್‌ಸೈಟ್ https://ashraya.karnataka.gov.in/
ಉದ್ದೇಶ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿಭಾಗಕ್ಕೆ ಕೈಗೆಟಕುವ ಮನೆಗಳನ್ನು ಒದಗಿಸುವುದು
ಸ್ಕೀಮ್‌ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿರುವವರು, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಯಲ್ಲಿನ ಜನರು

 

ಬಸವ ವಸತಿ ಯೋಜನೆ: ಉದ್ದೇಶಗಳು

ಬಸವ ವಸತಿ ಯೋಜನೆಯನ್ನು ಜನಪ್ರಿಯವಾಗಿ ಆರ್‌ಜಿಆರ್‌ಎಚ್‌ಸಿಎಲ್ (ರಾಜೀವ್ ಗಾಂಧಿ ಗ್ರಾಮೀಣ ವಸತಿ ಕಾರ್ಪೊರೇಶನ್ ಲಿಮಿಟೆಡ್‌) ಸ್ಕೀಮ್ ಎಂದು ಕರೆಯಲಾಗಿದೆ. ಈ ಯೋಜನೆಯು ನಿರಾಶ್ರಿತರಿಗೆ ಸಹಾಯ ಮಾಡುವ ಉದಾತ್ತ ಉದ್ದೇಶಗಳು ಮತ್ತು ಗುರಿಗಳನ್ನು ಹೊಂದಿದೆ. ಆರ್‌ಜಿಆರ್‌ಎಚ್‌ಸಿಎಲ್‌ ಯೋಜನೆಯಡಿ, ಜನರಿಗೆ ಕೈಗೆಟುಕುವ ವೆಚ್ಚದಲ್ಲಿ ಮನೆಗಳನ್ನು ನೀಡಲಾಗುತ್ತದೆ, ವಿಶೇಷವಾಗಿ ಆರ್ಥಿಕ ಪರಿಸ್ಥಿತಿಯಿಂದಾಗಿ ಮನೆ ಖರೀದಿಸಲು ಸಾಧ್ಯವಾಗದವರಿಗೆ ಮನೆ ನಿರ್ಮಿಸಲಾಗುತ್ತಿದೆ. ರಾಜ್ಯಾದ್ಯಂತ ವಸತಿ ನಿರ್ಮಾಣ ಉದ್ದೇಶದಿಂದ ಕರ್ನಾಟಕ ಸರ್ಕಾರವು ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಆರ್‌ಜಿಆರ್‌ಎಚ್‌ಸಿಎಲ್‌) ಅನ್ನು ರಚಿಸಿದೆ.

2021 ರಲ್ಲಿ ಪ್ರಾರಂಭಿಸಲಾದ ಇದನ್ನು ನಿರಾಶ್ರಿತರಿಗೆ ಮನೆಗಳನ್ನು ಒದಗಿಸಲು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿತ್ತು. ಆದರೆ ಯೋಜನೆಯ ವ್ಯಾಪ್ತಿಯು ಗಣನೀಯವಾಗಿ ವಿಸ್ತರಿಸಿದೆ, ಇದು ಜನರ ಜೀವನವನ್ನು ಬದಲಾಯಿಸುವ ಆಶ್ರಯವನ್ನು ಒದಗಿಸುತ್ತದೆ. 2020-21 ಬಜೆಟ್‌ನಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ 2 ಲಕ್ಷ ಮನೆಗಳ ಅಭಿವೃದ್ಧಿಗೆ 2500 ಕೋಟಿ ರೂಪಾಯಿಗಳ ಬಜೆಟ್ ಅನ್ನು ಮೀಸಲಿಟ್ಟರು.

ಬಸವ ವಸತಿ ಯೋಜನೆ ವಿಶೇಷತೆಗಳೆಂದರೆ, ರಾಜ್ಯದಾದ್ಯಂತ ಇರುವ ನಿರಾಶ್ರಿತರಿಗೆ, ನಗರ ಅಥವಾ ಗ್ರಾಮಾಂತರವೇ ಆಗಿರಲಿ, ಅವರು ಎಲ್ಲಿಂದ ಬಂದರು ಎಂಬುದನ್ನು ಲೆಕ್ಕಿಸದೆ ಅವರ ಅಗತ್ಯವನ್ನು ಪೂರೈಸುವುದು. ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಭಿಸಿದೆ ಮತ್ತು ಕರ್ನಾಟಕ ವಸತಿ ಇಲಾಖೆಯ ನೆರವಿನೊಂದಿಗೆ ಸಕ್ರಿಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಮತ್ತು ಕಾರ್ಯಗತಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಫಲಾನುಭವಿಗಳಿಗೆ ಸೂರು ಕಲ್ಪಿಸುವುದು ಇದರ ಗುರಿಯಾಗಿದೆ. ಆರ್‌ಜಿಆರ್‌ಎಚ್‌ಸಿಎಲ್‌ ಯೋಜನೆಯ ಅರ್ಜಿದಾರರು ಪ್ರೋಗ್ರಾಂನಲ್ಲಿ ಸೇರಿಸಿಕೊಳ್ಳುವ ಅತ್ಯುತ್ತಮ ಅವಕಾಶವನ್ನು ಖಚಿತಪಡಿಸಿಕೊಳ್ಳಲು ಕಾರ್ಯವಿಧಾನ ಮತ್ತು ಅರ್ಜಿ ಪ್ರಕ್ರಿಯೆಯ ವಿವರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಬಸವ ವಸತಿ ಯೋಜನೆಯು ಕರ್ನಾಟಕ ಸರ್ಕಾರದ ಕಾರ್ಯಕ್ರಮವಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಬಸವ ಯೋಜನಾ ಯೋಜನೆಯ ಮೂಲಕ, ಆರ್ಥಿಕ ಪರಿಸ್ಥಿತಿಯಿಂದ ಮನೆ ಪಡೆಯಲು ಸಾಧ್ಯವಾಗದ ಹಿಂದುಳಿದ ಜನರು ಸ್ವಂತ ಜಮೀನು ಹೊಂದಿದ್ದರೆ ಸ್ವಂತ ವಾಸಸ್ಥಳವನ್ನು ನಿರ್ಮಿಸಿಕೊಳ್ಳಬಹುದು. ಸರ್ಕಾರ ಪಕ್ಕಾ ಮನೆ ನಿರ್ಮಿಸಲು ಕಟ್ಟಡ ಸಾಮಗ್ರಿ ನೀಡುತ್ತದೆ. ಸಂಪೂರ್ಣ ಬಸವ ವಸತಿ ಯೋಜನೆಯು ಜನರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ.

ಇದನ್ನೂ ನೋಡಿ: ಸಿಡ್ಕೋ ನಿವಾರ ಕೇಂದ್ರದ ಬಗ್ಗೆ ಸಮಗ್ರ ಮಾಹಿತಿ

 

ಬಸವ ವಸತಿ ಯೋಜನೆ 2022: ಪ್ರಯೋಜನಗಳು

ಕರ್ನಾಟಕ ಸರ್ಕಾರವು ಆರ್‌ಜಿಆರ್‌ಎಚ್‌ಸಿಎಲ್‌ ಯೋಜನೆಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಡ ವರ್ಗಕ್ಕೆ ಸೇರಿರುವ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಇದು ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮನೆಗಳನ್ನು ಒದಗಿಸುತ್ತದೆ.

ಇದನ್ನೂ ನೋಡಿ: ಪಿಎಂಎವೈ ಗ್ರಾಮೀಣ ಕುರಿತು ಸಮಗ್ರ ಮಾಹಿತಿ

 

ಬಿಪಿಎಲ್ ಕುಟುಂಬಗಳಿಗೆ ಕರ್ನಾಟಕ ವಸತಿ ಯೋಜನೆ: ಬಸವ ವಸತಿ ಯೋಜನೆ ಫಲಾನುಭವಿಗಳು

 

ಬಸವ ವಸತಿ ಯೋಜನೆಯ ಮುಖ್ಯ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿರುವ ಜನರು ಅಥವಾ ಹಿಂದುಳಿದ ಸಮುದಾಯಗಳ ಜನರು.

ಬಸವ ವಸತಿ ಯೋಜನೆಯು ರಾಜ್ಯದ ಖಾಯಂ ನಿವಾಸಿಗಳಿಗೆ ಮಾತ್ರ ತೆರೆದಿರುತ್ತದೆ ಮತ್ತು ವಲಸಿಗರು ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆದ್ದರಿಂದ, ಒಟ್ಟಾರೆಯಾಗಿ, ಬಸವ ವಸತಿ ಯೋಜನೆಗೆ ಈ ಕೆಳಗಿನವರು ಫಲಾನುಭವಿಗಳಾಗಿರುತ್ತಾರೆ:

ಆರ್‌ಜಿಆರ್‌ಎಚ್‌ಸಿಎಲ್‌ ಪ್ರಕಟಿಸಿದ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಎಲ್ಲಾ ಫಲಾನುಭವಿಗಳು ಇಂದಿರಾ ಮನೆ ಆಪ್‌ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಇಂದಿರಾ ಮನೆ ಅಪ್ಲಿಕೇಶನ್‌ನಲ್ಲಿ ತಮ್ಮ ಮನೆಗಳ ಸುಧಾರಣೆಯ ಸ್ಥಿತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಸರ್ಕಾರಿ ಪ್ರಾಧಿಕಾರದಿಂದ ಹಣ ಬಿಡುಗಡೆಗೆ ಚಟುವಟಿಕೆ ಅನಿವಾರ್ಯವಾಗಿದೆ.

ಇದನ್ನೂ ನೋಡಿ: ಎಪಿ ಹೌಸಿಂಗ್ ಕಾರ್ಪೊರೇಷನ್ ಬಗ್ಗೆ

 

ಬಸವ ವಸತಿ ಯೋಜನೆ ಅರ್ಹತೆ

ಕರ್ನಾಟಕದಲ್ಲಿ ಬಸವ ವಸತಿ ಯೋಜನೆ 2021 ಯೋಜನೆಯಡಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರಿಗೆ ರಾಜ್ಯ ಸರ್ಕಾರವು ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದೆ:

ಆದಾಗ್ಯೂ, ಆರ್‌ಜಿಆರ್‌ಎಚ್‌ಸಿಎಲ್‌ ಯೋಜನೆಯ ಫಲಾನುಭವಿಗಳು ತಮ್ಮ ಸ್ವಂತ ಮನೆಗಳನ್ನು ಹೊಂದಿರಬಹುದು. ಆದರೆ, ಈ ಮೇಲೆ ನಮೂದಿಸಿದ ಅಂಶಗಳಿಗೆ ವೈರುಧ್ಯವಾಗಿರಬಾರದು ಎಂಬುದನ್ನು ಗಮನಿಸಬೇಕು. ಬಸವ ವಸತಿ ಯೋಜನೆಯು ಅವರಿಗೆ 85% ಕಚ್ಚಾ ವಸ್ತುಗಳನ್ನು ಉಚಿತವಾಗಿ ನೀಡುತ್ತದೆ. ಇದು ನಿಜವಾಗಿಯೂ ಆಶ್ರಯ ನೀಡುವುದಕ್ಕಿಂತ ಹೆಚ್ಚಿನ ಅನುಕೂಲವಾಗಿದೆ. ಇದು ರಾಷ್ಟ್ರದ ಸುಸ್ಥಿರತೆಯ ಗುರಿಗಳಿಗೆ ಬದ್ಧವಾಗಿರುವುದರ ಜೊತೆಗೆ ಉತ್ತಮ ಜೀವನಮಟ್ಟವನ್ನು ಖಾತ್ರಿಗೊಳಿಸುತ್ತದೆ.

ಇದನ್ನೂ ನೋಡಿ: ಸಿಡ್ಕೋ ಲಾಟರಿ 2022 ರ ಬಗ್ಗೆ ಸಮಗ್ರ ಮಾಹಿತಿ

 

ಬಸವ ವಸತಿ ಯೋಜನೆ 2022 ಅರ್ಜಿ ನಮೂನೆ

ಬಸವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರು ಆರ್‌ಜಿಆರ್‌ಎಚ್‌ಸಿಎಲ್‌ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಪಡೆಯಬಹುದು.

ಹೂಡಾ ಪ್ಲಾಟ್‌ಗಳ ಯೋಜನೆಯ ಬಗ್ಗೆಯೂ ಓದಿ

 

ರಾಜೀವ್ ಗಾಂಧಿ ವಸತಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ?

ಆರ್‌ಜಿಆರ್‌ಎಚ್‌ಸಿಎಲ್‌ ಇದನ್ನು ರಾಜೀವ್ ಗಾಂಧಿ ವಸತಿ ನಿಗಮ ಎಂದೂ ಕರೆಯುತ್ತಾರೆ, ಇದಕ್ಕೆ ಅರ್ಜಿದಾರರು ವಸತಿ ಯೋಜನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಬಸವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ವಿಧಾನವನ್ನು ಅನುಸರಿಸಿ:

ರಾಜೀವ್ ಗಾಂಧಿ ವಸತಿ ನಿಗಮದ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಪ್ರಾಧಿಕಾರವು ಅಂತಿಮಗೊಳಿಸಿದೆ ಮತ್ತು ವೀಕ್ಷಣೆಗೆ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ.

ಫಲಾನುಭವಿಗಳನ್ನು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಲಾಟರಿ ಪದ್ಧತಿಯ ಮೂಲಕ ಆಯ್ಕೆ ಮಾಡುತ್ತಾರೆ. ಗುರುತಿಸಿದ ನಂತರ, ಫಲಾನುಭವಿಯ ವಿಳಾಸಕ್ಕೆ ಬಿಡಿಒ ಭೇಟಿ ನೀಡುತ್ತಾರೆ ಮತ್ತು ಫಾರ್ಮ್-17 ರಲ್ಲಿ ಹೆಸರನ್ನು ಸಲ್ಲಿಸುತ್ತಾರೆ. ನಂತರ ಅದನ್ನು ಕಾರ್ಯನಿರ್ವಾಹಕ ಅಧಿಕಾರಿಗೆ ರವಾನಿಸಲಾಗುತ್ತದೆ. ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ, ಆರ್ಜಿಆರ್‌ಎಚ್‌ಸಿಎಲ್‌ 2020-21 ಪಟ್ಟಿಯನ್ನು ಸ್ಥಳೀಯ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಡಿಡಿಎ ವಸತಿ ಯೋಜನೆಯ ಬಗ್ಗೆ ಸಮಗ್ರ ವಿವರ ಓದಿ

 

ಬಸವ ವಸತಿ ಯೋಜನೆಗೆ ಅಗತ್ಯ ದಾಖಲೆಗಳು

ಆರ್‌ಜಿಆರ್‌ಎಚ್‌ಸಿಎಲ್‌ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರಿಗೆ ಕೆಳಗಿನ ದಾಖಲೆಗಳ ಅಗತ್ಯವಿದೆ:

ಇದನ್ನೂ ನೋಡಿ: ಕರ್ನಾಟಕ ರೇರಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

 

ಅರ್ಜಿ ತುಂಬಲು ಬಸವ ವಸತಿ ಯೋಜನೆಯ ಅವಶ್ಯಕತೆಗಳು

ಇದನ್ನೂ ನೋಡಿ: ಎಂಎಚ್‌ಎಡಿಎ ಲಾಟರಿ 2022 ಪುಣೆ ದಿನಾಂಕಗಳ ಬಗ್ಗೆ

 

ಆರ್‌ಜಿಆರ್‌ಎಚ್‌ಸಿಎಲ್‌ ಯೋಜನೆ: ಲಾಗಿನ್ ಮಾಡುವ ವಿಧಾನ

ಅಧಿಕೃತ ಪೋರ್ಟಲ್‌ಗೆ ಸೈನ್ ಇನ್ ಮಾಡಲು ಪ್ರತಿ ಹಂತದ ಪ್ರಕ್ರಿಯೆ ಇಲ್ಲಿದೆ.

 

 

 

 

ರಾಜೀವ್ ಗಾಂಧಿ ವಸತಿ ಯೋಜನೆ: ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ಅರ್ಜಿದಾರರು ಆರ್‌ಜಿಆರ್‌ಎಚ್‌ಸಿಎಲ್‌ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಲು ಕೆಳಗೆ ವಿವರಿಸಿದ ವಿಧಾನವನ್ನು ಅನುಸರಿಸಬಹುದು:

* ಆರ್‌ಜಿಆರ್‌ಎಚ್‌ಸಿಎಲ್‌ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಮೇಲಿನ ಮೆನುವಿನಿಂದಫಲಾನುಭವಿ ಮಾಹಿತಿಆಯ್ಕೆಮಾಡಿ.

 

 

*ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಜಿಲ್ಲೆಯನ್ನು ಆಯ್ಕೆ ಮಾಡಬಹುದು ಮತ್ತು ಸ್ವೀಕೃತಿ ಸಂಖ್ಯೆಯನ್ನು ನಮೂದಿಸಬಹುದು. ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಲುಸಲ್ಲಿಸುಕ್ಲಿಕ್ ಮಾಡಿ.

 

 ನಿಮ್ಮ ಬಸವ ವಸತಿ ಯೋಜನೆ ಅರ್ಜಿ ಸ್ಥಿತಿಯು ಪರದೆಯ ಮೇಲೆ ಗೋಚರಿಸುತ್ತದೆ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಸ್ಥಿತಿಯನ್ನು ನೀವು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ನೋಡಿ: ಕರ್ನಾಟಕ ಭೂಮಿ ಆರ್‌ಟಿಸಿ ಪೋರ್ಟಲ್ ಬಗ್ಗೆ ಸಮಗ್ರ ಮಾಹಿತಿ

 

ಬಸವ ವಸತಿ ಯೋಜನೆ: ಫಲಾನುಭವಿಗಳ ಆಯ್ಕೆ ಹೇಗೆ ಮಾಡಲಾಗುತ್ತದೆ?

ಎಲ್ಲಾ ನಮೂದುಗಳನ್ನು ಸ್ವೀಕರಿಸಿದ ನಂತರ, ಅಂತಿಮ ಫಲಾನುಭವಿಗಳನ್ನು ಕ್ಷೇತ್ರದ ಶಾಸಕರು ಅಥವಾ ಗ್ರಾಮ ಪಂಚಾಯಿತಿ ಆಯ್ಕೆ ಮಾಡುತ್ತದೆ ಮತ್ತು ನಂತರ ಬಸವ ವಸತಿ ಯೋಜನೆಯ ಅಧಿಕಾರಿಗಳು ಅಂತಿಮಗೊಳಿಸುತ್ತಾರೆ. ಬಸವ ವಸತಿ ಯೋಜನೆಯಡಿ ಆಯ್ಕೆಯಾದ ಪ್ರತಿಯೊಬ್ಬ ಫಲಾನುಭವಿಗೆ ಬಸವ ವಸತಿ ಯೋಜನೆಯಡಿ ಮನೆಗಳ ಘಟಕ ವೆಚ್ಚವನ್ನು ಅಂದರೆ 1.5 ಲಕ್ಷ ರೂ. ಅನ್ನು ನೀಡಲಾಗುತ್ತದೆ.

 

ರಾಜೀವ್ ಗಾಂಧಿ ವಸತಿ ಯೋಜನೆ: ಹೆಸರು ತಿದ್ದುಪಡಿ ವರದಿಯನ್ನು ಪರಿಶೀಲಿಸುವುದು ಹೇಗೆ?

 

ಇದನ್ನೂ ನೋಡಿ: ರಾಜೀವ್ ಗಾಂಧಿ ವಸತಿ ನಿಗಮದ ಬಗ್ಗೆ

 

ಬಸವ ವಸತಿ ಯೋಜನೆ: ಅನುದಾನ ಬಿಡುಗಡೆ ಮಾಹಿತಿಯನ್ನು ಪರಿಶೀಲಿಸುವುದು ಹೇಗೆ?

 

 

ಬಸವ ವಸತಿ ಯೋಜನೆ: ಆಧಾರ್ ಲಿಂಕ್ ಮಾಡುವ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ಎಲ್ಲಾ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಸಕಾಲಿಕ ಸಬ್ಸಿಡಿ ಪಡೆಯಲು, ತಮ್ಮ ಪ್ರೊಫೈಲ್‌ಗೆ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕಾಗುತ್ತದೆ. ಬಸವ ವಸತಿ ಯೋಜನೆಗಾಗಿ ಆಧಾರ್ ಲಿಂಕ್ ಮಾಡುವ ಸ್ಥಿತಿಯನ್ನು ಪರಿಶೀಲಿಸಲು, ಬಳಕೆದಾರರು ಯುಐಡಿಎಐ ಬ್ಯಾಂಕ್ ಮ್ಯಾಪಿಂಗ್ ಪೋರ್ಟಲ್‌ಗೆ ಭೇಟಿ ನೀಡಬೇಕು ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ

 

ಬಿಪಿಎಲ್ ಕುಟುಂಬಗಳಿಗೆ ಕರ್ನಾಟಕ ವಸತಿ ಯೋಜನೆ: ವಸತಿ ರಹಿತ ಕುಟುಂಬಗಳ ವರದಿಗಳನ್ನು ಪರಿಶೀಲಿಸುವುದು ಹೇಗೆ?

ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಕೆಲವು ಕಾರಣಗಳಿಂದ ಮನೆ ಕಳೆದುಕೊಂಡು ಪ್ರಸ್ತುತ ನಿರಾಶ್ರಿತರಾಗಿರುವ ಎಲ್ಲಾ ವ್ಯಕ್ತಿಗಳ ವಿವರವಾದ ದಾಖಲೆಯನ್ನು ನಿರ್ವಹಿಸುತ್ತದೆ. ಮನೆಯಿಲ್ಲದ ಕುಟುಂಬಗಳ ವಿವರಗಳನ್ನು ಪರಿಶೀಲಿಸಲು ಕೆಳಗಿನ ಹಂತಗಳನ್ನು ಅನುಸರಿಸುವ ಅಗತ್ಯವಿದೆ

 

 

 

 

ಬಸವ ವಸತಿ ಯೋಜನೆಗೆ ಪ್ರಮುಖ ಲಿಂಕ್‌ಗಳು

ಮನೆಯಿಲ್ಲದ ಕುಟುಂಬಗಳು https://ashraya.karnataka.gov.in/Report/frmHouslessNew.aspx
ಪಾವತಿ ವೈಫಲ್ಯ https://ashraya.karnataka.gov.in/Report/Payment_Failure.aspx
ಗುರಿ ವಿವರಗಳು https://ashraya.karnataka.gov.in/Report/frmTargetNew.aspx
ಭೌತಿಕ ಪ್ರಗತಿ ವರದಿ https://ashraya.karnataka.gov.in/Report/frm9BGridBenfwise.aspx
ಜಿಪಿಎಸ್‌ ಫೋಟೋ ಕ್ಲಿಕ್ ಸ್ಥಿತಿ https://ashraya.karnataka.gov.in/Report/PhotoClick.aspx
ಸರಿ ಇಲ್ಲ ವಿವರಗಳು https://ashraya.karnataka.gov.in/Report/frmNotOk.aspx
ಜಿಯೋ ನಕಲು ಪ್ರಗತಿ https://ashraya.karnataka.gov.in/Report/frmGeoDupProgress.aspx
ನಿರ್ಬಂಧಿಸಿದ ಮನೆಗಳು https://ashraya.karnataka.gov.in/Report/frmGeoDupProgress.aspx
ಹೆಸರು ತಿದ್ದುಪಡಿ ಸ್ಥಿತಿ https://ashraya.karnataka.gov.in/Report/frmNameCorrection.aspx
ಸಾವಿನ ಪ್ರಕರಣದ ಸ್ಥಿತಿ https://ashraya.karnataka.gov.in/Report/DeathCase.aspx
ಸಬ್ಸಿಡಿ ನಿಧಿ ಬಿಡುಗಡೆಗಳು https://ashraya.karnataka.gov.in/Report/BenfWiseFundReleases.aspx
ಎಂಪಿಐಸಿ https://ashraya.karnataka.gov.in/Report/MPIC_Report.aspx

 

ಇಂದಿರಾ ಮನೆ ಬಸವ ವಸತಿ ಯೋಜನೆ: ಮೊಬೈಲ್ ಅಪ್ಲಿಕೇಶನ್ ಸೇವೆಗಳು

ಆರ್‌ಜಿಆರ್‌ಎಚ್‌ಸಿಎಲ್‌ ಯೋಜನೆಯು ಎಲ್ಲಾ ವಸತಿ ಯೋಜನೆಗಳಿಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಬಸವ ವಸತಿ ಯೋಜನೆ ಅಡಿಯಲ್ಲಿ ತಮ್ಮ ಫಲಾನುಭವಿಯ ಸ್ಥಿತಿಯನ್ನು ವೀಕ್ಷಿಸಬಹುದು ಮತ್ತು ಅಪ್ಲಿಕೇಶನ್ ಅನ್ನು ಬಳಸಿಕೊಂಡು ಅವರ ದಾಖಲೆಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು. ಹಾಗೆ ಮಾಡಲು, ನೀವು ಕೆಳಗಿನ ಹಂತಗಳನ್ನು ಅನುಸರಿಸಬೇಕು:

 

ಆರ್‌ಜಿಆರ್‌ಎಚ್‌ಸಿಎಲ್ ವರ್ಕ್ ಆರ್ಡರ್‌

ಕೆಲಸದ ಆರ್ಡರ್ ಪಡೆಯಲು ಅಧಿಕೃತ ಆರ್‌ಜಿಆರ್‌ಎಚ್‌ಸಿಎಲ್‌ ವೆಬ್‌ಸೈಟ್‌ಗೆ ಹೋಗಿ. ನೀಡಿರುವ ಆಯ್ಕೆಗಳಿಂದ ನಗರ ಅಥವಾ ಗ್ರಾಮೀಣವನ್ನು ಆಯ್ಕೆಮಾಡಿ. ಜಿಲ್ಲೆಯನ್ನು ಆಯ್ಕೆ ಮಾಡಿ ಮತ್ತು ಸಂಖ್ಯೆ ಅಥವಾ ಫಲಾನುಭವಿ ಕೋಡ್ ಅನ್ನು ನಮೂದಿಸಿ. ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ.

 

 

ಬಸವ ವಸತಿ ಯೋಜನೆ ಸಹಾಯವಾಣಿ ಸಂಪರ್ಕ ವಿವರಗಳು

ಬಸವ ವಸತಿ ಯೋಜನೆಯ ಅರ್ಜಿದಾರರು ಯಾವುದೇ ವ್ಯತ್ಯಯ ಅಥವಾ ಸಬ್ಸಿಡಿಸಂಬಂಧಿತ ಮಾಹಿತಿಗಾಗಿ ಪ್ರಾಧಿಕಾರವನ್ನು ಸಂಪರ್ಕಿಸಲು ಕೆಳಗಿನ ವಿಳಾಸವನ್ನು ಬಳಸಬಹುದು:

ಕಾವೇರಿ ಭವನ, 9ನೇ ಮಹಡಿ, ಸಿ&ಎಫ್ ಬ್ಲಾಕ್ ಕೆಜಿ ರಸ್ತೆ, ಬೆಂಗಳೂರು -560009, ಫ್ಯಾಕ್ಸ್: 91-080-22247317, ಇಮೇಲ್: rgrhcl@nic.in ಮತ್ತು ಸಂಪರ್ಕ ಕೇಂದ್ರ: 080-23118888.

 

ಬಸವ ವಸತಿ ಯೋಜನೆ: ಇತ್ತೀಚಿನ ನವೀಕರಣ

ನವೀಕರಿಸಿರುವುದು ಜುಲೈ 16, 2021

ಇತ್ತೀಚೆಗೆ, ಕರ್ನಾಟಕ ಸರ್ಕಾರವು ಮುಂದಿನ ಎರಡು ವರ್ಷಗಳಲ್ಲಿ ಒಂಬತ್ತು ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿತು, ಅದರಲ್ಲಿ ಐದು ಲಕ್ಷ ಘಟಕಗಳನ್ನು ಬಸವ ವಸತಿ ಯೋಜನೆ ಸೇರಿದಂತೆ ರಾಜ್ಯದ ವಸತಿ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾಗುವುದು. ಇದರ ಜೊತೆಗೆ ರಾಜ್ಯದ ವಸತಿ ಯೋಜನೆಗಳಿಗೆ ಸುಮಾರು 6,200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು. ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಇದು ಇನ್ನೂ ಸರ್ಕಾರಿ ಕಚೇರಿಗಳಿಂದ ಸಹಾಯಧನಕ್ಕಾಗಿ ಕಾಯುತ್ತಿರುವ ಫಲಾನುಭವಿಗಳ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸುತ್ತದೆ.

ನವೀಕರಿಸಿರುವುದು ಜುಲೈ 21, 2021

ಕರ್ನಾಟಕದಲ್ಲಿ ಕೈಗೆಟಕುವ ದರದ ವಸತಿ ಕಾರ್ಯಕ್ರಮವು ಪೂರ್ಣಗೊಳ್ಳುವುದಕ್ಕೆ ಇನ್ನೂ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂದು ತೋರುತ್ತದೆ. ಇದಕ್ಕೆ ಪ್ರಮುಖ ಕಾರಣ, ರಾಜ್ಯ ಸರ್ಕಾರದಿಂದ ಸರಿಯಾದ ಭೂ ದಾಖಲಾತಿ ಇಲ್ಲದಿರುವುದು. ಭೂಮಿಯನ್ನು ಗುರುತಿಸಿದ್ದರೂ, ಹಲವಾರು ನಿದರ್ಶನಗಳಿಗೆ ಹಕ್ಕುಪತ್ರ ಮತ್ತು ಹಕ್ಕುಪತ್ರದಂತಹ ಭೂಮಿಯ ದಾಖಲೆಗಳು ಲಭ್ಯವಿಲ್ಲ. ಅಲ್ಲದೆ, ನಿಧಾನಗತಿಯಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 1.6 ಲಕ್ಷ ಅರ್ಜಿದಾರರ ಪೈಕಿ 15,758 ಅರ್ಜಿಗಳು ಮಾತ್ರ ದಾಖಲೆಗಳ ಕೊರತೆಯಿಂದಾಗಿ ಗೃಹ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗಿವೆ.

****

ಕರ್ನಾಟಕ ರಾಜ್ಯ ಸರ್ಕಾರವು ಬಸವ ವಸತಿ ಯೋಜನೆ 2021 ಸೇರಿದಂತೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಸುಮಾರು 1.69 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸುತ್ತಿದೆ. ಮೈಸೂರು, ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸುಮಾರು 69,000 ಮನೆಗಳನ್ನು ನಿರ್ಮಿಸಲಾಗುವುದು ಮತ್ತು ರಾಜೀವ್‌ ಗಾಂಧಿ ಹೌಸಿಂಗ್ ಕಾರ್ಪೊರೇಷನ್ 10,000 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ಇನ್ನೂ 1.2 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು

 

ಬಸವ ವಸತಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳು

ಬಡವರಿಗೆ ಶಾಶ್ವತ ಸೂರು ಕಲ್ಪಿಸುವ ಉದ್ದೇಶದಿಂದ ಬಸವ ವಸತಿ ಯೋಜನೆ ಜಾರಿಗೆ ಬಂದಿದ್ದರೂ ಅನುಷ್ಠಾನಗೊಂಡ ನಂತರ ಹಲವಾರು ಸಮಸ್ಯೆಗಳು ತಲೆದೋರಿವೆ. ಬಸವ ವಸತಿ ಯೋಜನೆಯ ಫಲಾನುಭವಿಗಳು ಮನೆ ಕಟ್ಟಿಕೊಂಡರೂ ಮೊದಲ ತಿಂಗಳಲ್ಲೇ ಕಂತು ಕಟ್ಟಲು ವಿಫಲರಾಗುತ್ತಿದ್ದಾರೆ. ವಸತಿ ಗೃಹಗಳ ಅನುಷ್ಠಾನದ ಪ್ರಕ್ರಿಯೆಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅಥವಾ ಫಲಾನುಭವಿಗಳ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಅಧಿಕಾರಿಗಳು ಇರಲಿಲ್ಲ. ಯೋಜನೆಯಡಿ ಮನೆಗಳಿಗೆ ಲಾಕ್ ಹಾಕುವುದು ಪ್ರಾಥಮಿಕ ಸಮಸ್ಯೆಗಳಲ್ಲೊಂದು. ಫಲಾನುಭವಿಗಳು ತಮ್ಮ ಮನೆಗಳನ್ನು ಹಂಚಿಕೆ ಮಾಡಿದ ದಿನಾಂಕದಿಂದ ಆರು ತಿಂಗಳೊಳಗೆ ತಮ್ಮ ಮನೆಗಳನ್ನು ನಿರ್ಮಿಸಲು ಪ್ರಾರಂಭಿಸದಿದ್ದರೆ ಲಾಕ್ ವ್ಯವಸ್ಥೆಯು ಮನೆಗಳಿಗೆ ಲಾಕ್ ಹಾಕುತ್ತದೆ.

 

ಬಸವ ವಸತಿ ಯೋಜನೆಗೆ ಬಜೆಟ್ ಹಂಚಿಕೆ

ಕರ್ನಾಟಕ ಸರ್ಕಾರವು 2020 ರಲ್ಲಿ ಪ್ರತಿ ಪಂಚಾಯತ್ ಮಿತಿಯಲ್ಲಿ ಕನಿಷ್ಠ 20 ಮನೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರವು ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆಗಳ ಅಡಿಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ 1.69 ಲಕ್ಷ ಮನೆಗಳನ್ನು ನಿರ್ಮಿಸುತ್ತದೆ. 64 ಲಕ್ಷ ನಿವೇಶನಗಳ ಅಭಿವೃದ್ಧಿಗೆ ಸರಕಾರ 200 ಕೋಟಿ ರೂ. ಮೀಸಲಿಟ್ಟಿದೆ. ರಾಯಚೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ 69,000 ಮನೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜೀವ್ ಗಾಂಧಿ ವಸತಿ ನಿಗಮವು ಈಗ 10,100 ಕೋಟಿ ರೂ.ನಲ್ಲಿ 1.2 ಲಕ್ಷ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ.

 

ಸಾಮಾನ್ಯವಾಗಿ ಉತ್ತರಿಸಲಾದ ಪ್ರಶ್ನೆಗಳು (FAQs)

ಏನಿದು ಬಸವ ವಸತಿ ಯೋಜನೆ?

ಕರ್ನಾಟಕ ಸರ್ಕಾರದ ಬಸವ ವಸತಿ ಯೋಜನೆಯು ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮನೆಗಳನ್ನು ನಿರ್ಮಿಸಲು ಕಚ್ಚಾ ಸಾಮಗ್ರಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ನಾನು ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದರೆ ಬಸವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದೇ?

ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಬಸವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಆರ್‌ಜಿಆರ್‌ಎಚ್‌ಸಿಎಲ್‌ ಎಂದರೇನು?

ಆರ್‌ಜಿಆರ್‌ಎಚ್‌ಸಿಎಲ್‌ (ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್) ಅನ್ನು ಕರ್ನಾಟಕದಲ್ಲಿ ಕೇಂದ್ರ ಮತ್ತು ರಾಜ್ಯ ವಸತಿ ಯೋಜನೆಗಳನ್ನು ಜಾರಿಗೆ ತರಲು 2000 ರಲ್ಲಿ ಸ್ಥಾಪಿಸಲಾಯಿತು.

ಬಸವ ವಸತಿ ಯೋಜನೆಯನ್ನು ಯಾರು ನಿರ್ವಹಿಸುತ್ತಾರೆ?

ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಬಸವ ವಸತಿ ಯೋಜನೆಯನ್ನು ನಿರ್ವಹಿಸುತ್ತದೆ. ಈ ಸಂಸ್ಥೆಯನ್ನು ಕರ್ನಾಟಕ ಸರ್ಕಾರವು 2000 ರಲ್ಲಿ ಸ್ಥಾಪಿಸಿತು.

(ಸುರಭಿ ಗುಪ್ತಾ ಅವರಿಂದ ವಿವರದೊಂದಿಗೆ)

Was this article useful?
  • ? (4)
  • ? (2)
  • ? (1)
Exit mobile version