Site icon Housing News

ಈ ಹಬ್ಬದ ಋತುವಿನಲ್ಲಿ, ನಿಮ್ಮ ಹೊಸ ಮನೆಗಾಗಿ ಗೃಹ ಪ್ರವೇಶದ ಸಲಹೆಗಳು

Griha pravesh tips for your new house, this Dussehra

ಆಸ್ತಿಯನ್ನು ಖರೀದಿಸುವ ಅಥವಾ ಒಂದು ಹೊಸ ಮನೆಗೆ ಸ್ಥಳಾಂತರಗೊಳ್ಳುವಾಗ, ಭಾರತೀಯರು ಸಾಮಾನ್ಯವಾಗಿ ಶುಭ ಮುಹೂರ್ತಗಳ ಬಗ್ಗೆ ನಿರ್ದಿಷ್ಟರಾಗಿರುತ್ತಾರೆ. ಗೃಹ ಪ್ರವೇಶ ಸಮಾರಂಭವನ್ನು ಒಂದು ಮಂಗಳಕರ ದಿನದಂದು ಮಾಡುವುದರಿಂದ, ಅವರಿಗೆ ಒಳ್ಳೆ ಯೋಗ ಬರುತ್ತದೆ ಎಂದು ಅವರು ನಂಬುತ್ತಾರೆ.

ಯಾರೊಬ್ಬರು ತಮ್ಮ ಹೊಸ ಮನೆಯನ್ನು ಮೊದಲನೇ ಬಾರಿ ಪ್ರವೇಶಿಸಿದಾಗ, ಗೃಹ ಪ್ರವೇಶ ಸಮಾರಂಭವನ್ನು ಮಾಡಲಾಗುತ್ತದೆ. “ಇದು ಕೇವಲ ಮಾಲೀಕರಿಗೆ ಮಾತ್ರವಲ್ಲದೆ ಇಡೀ ಕುಟುಂಬಕ್ಕೂ ಸಹ ಮುಖ್ಯವಾದುದು”, ಎಂದು ಮುಂಬೈ ಮೂಲದ ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ತಜ್ಞರಾದ, ಜಯಶ್ರೀ ಧಮನಿ ಹೇಳುತ್ತಾರೆ. ಒಂದು ಮನೆ ಐದು ಅಂಶಗಳಿಂದ ಮಾಡಲ್ಪಟ್ಟಿದೆ – ಸೂರ್ಯ, ಭೂಮಿ, ನೀರು, ಬೆಂಕಿ ಮತ್ತು ಗಾಳಿ ಮತ್ತು ಒಂದು ಮನೆಯಲ್ಲಿ ಈ ಅಂಶಗಳ ಸರಿಯಾದ ಜೋಡಣೆ, ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ.

“ಒಂದು ಮಂಗಳಕರ ಸಮಯದಲ್ಲಿ ಮನೆಯನ್ನು ಪ್ರವೇಶಿಸುವುದರಿಂದ, ಹೊಸ ಮನೆಗೆ ತೆರಳಿದ ನಂತರ, ಕುಟುಂಬಕ್ಕೆ ಜೀವನ ಸುಲಭವಾಗುತ್ತದೆ ಮತ್ತು ಕನಿಷ್ಠ ಹೋರಾಟ ಇರುತ್ತದೆ. ಇಂಥ ಮುಹೂರ್ತಗಳಿಗೆ ಅನುಕೂಲಕರವಾದ ದಿನಗಳೆಂದರೆ ವಸಂತ ಪಂಚಮಿ, ಅಕ್ಷಯ ತ್ರಿತೀಯ, ಗುಡಿ ಪಾಡ್ವಾ, ದಸ್ಸೇಹ್ರಾ (ವಿಜಯದಶಮಿ ಎಂದು ಕೂಡ ಪ್ರಸಿದ್ಧ), ಆದರೆ ಉತ್ತರಾಯಣ, ಹೋಳಿ, ಅಧಿಕಮಾಸ ಮತ್ತು ಶ್ರಾಧ್ಧ ಪಕ್ಷದ ದಿನಗಳನ್ನು ತಪ್ಪಿಸಬೇಕು,” ಎಂದು ಧಮನಿ ಸೇರಿಸುತ್ತಾರೆ.

ದಸ್ಸೇಹ್ರಾದಂದು ಮಾಡಿದ ಮನೆಯ ಪ್ರವೇಶಕ್ಕೆ ಮಂಗಳಕರವಾದ ಸಮಯವೂ ಬೇಡ, ಏಕೆಂದರೆ ಈ ದಿನದ ಪ್ರತಿಯೊಂದು ಕ್ಷಣವೂ ಮಂಗಳಕರವಾಗಿದೆ. ಗೃಹ ಪ್ರವೇಶದ ಮೊದಲು ಕಲಶ ಪೂಜೆಯನ್ನು ಮಾಡಲಾಗುತ್ತದೆ.

ಈ ಕ್ರಿಯೆಗೆ, ಒಂದು ತಾಮ್ರದ ಬಿಂದಿಗೆಯನ್ನು ನೀರಿನಿಂದ ತುಂಬಿಸಲಾಗುತ್ತದೆ ಮತ್ತು ಒಂಬತ್ತು ತರಹದ ಧಾನ್ಯಗಳನ್ನು ಮತ್ತು ಒಂದು ನಾಣ್ಯವನ್ನು ಅದರಲ್ಲಿ ಹಾಕಲಾಗುತ್ತದೆ. ಬಿಂದಿಗೆಯ ಮೇಲೆ ಒಂದು ತೆಂಗಿನ ಕಾಯಿಯನ್ನು ಇರಿಸಲಾಗುತ್ತದೆ ಮತ್ತು ಒಬ್ಬರು ಅದರ ಜೊತೆ ಮನೆಯನ್ನು ಪ್ರವೇಶಿಸುತ್ತಾರೆ, ಪಂಡಿತರ ಮಂತ್ರಗಳ ಪಠಣದ ಜೊತೆಗೂಡಿ.

 

ಗೃಹ ಪ್ರವೇಶವನ್ನು ನಿರ್ವಹಿಸಲು ಮಾಡಬೇಕಾದವು ಮತ್ತು ಮಾಡಬಾರದ್ದಾದವು

ಕುಟುಂಬಕ್ಕೆ ಅದರೊಳಗೆ ಹೋಗಲು ಮತ್ತು ವಾಸಿಸಲು ಹೊಸ ಮನೆಯು ತಯಾರಿದ್ದಾಗ ಮಾತ್ರ ಗೃಹ ಪ್ರವೇಶ ಮಾಡಬೇಕು. “ಮನೆಯು ಪೂರ್ತಿಯಾಗಿ ತಯಾರಿರಬೇಕು. ಅದಕ್ಕೆ ಹೊಸದಾಗಿ ಬಣ್ಣ ಬಳಿಸಿರಬೇಕು ಮತ್ತು ಛಾವಣಿ ತಯಾರಿರಬೇಕು(ಅದು ಸ್ವತಂತ್ರ ಮನೆ ಇದ್ದಾಗ). ಬಾಗಿಲುಗಳು, ಕಿಟಕಿಗಳು ಮತ್ತು ಬೇರೆ ಬಿಡಿ ಭಾಗಗಳು ಕೂಡಾ ಪೂರ್ಣವಾಗಿರಬೇಕು,” ಎಂದು ವಾಸ್ತು ಪ್ಲಸ್ ನ ವಾಸ್ತು ಸಲಹೆಗಾರರಾದ ನಿತಿನ್ ಪರ್ಮಾರ್ ಹೇಳುತ್ತಾರೆ.  

“ವಾಸ್ತು ಪುರುಷ ಮತ್ತು ಬೇರೆ ದೇವರುಗಳನ್ನು ಪೂಜಿಸಲಾಗುತ್ತದೆ.

“ಸಮೃದ್ಧಿ ಮತ್ತು ಉತ್ತಮ ಕಂಪನಗಳಿಗೆ ಪ್ರವೇಶ ಬಿಂದುವಾದ ಮುಖ್ಯ ದ್ವಾರದ ಹೊಸ್ತಿಲು, ಸ್ವಸ್ತಿಕ ಮತ್ತು ಲಕ್ಷ್ಮಿ ಪಾದಗಳಂತಹ ಮಂಗಳಕರ ಚಿಹ್ನೆಗಳಿಂದ ಅಲಂಕೃತವಾಗಿರಬೇಕು. ಬಾಗಿಲ ಮೇಲೆ, ತಾಜಾ ಮಾವಿನ ಎಲೆಗಳು ಮತ್ತು ಚೆಂಡು ಹೂವುಗಳಿಂದ ತಯಾರಿಸಲಾದ ಒಂದು ತೋರಣವನ್ನು(ಸಂಸ್ಕೃತ ಶಬ್ದ ‘ತೋರಣ’ದಿಂದ ಉದ್ಭವವಾದ, ಇದರ ಅರ್ಥ ‘ಪವಿತ್ರ ಹೋಗುಗೆ’) ಕಟ್ಟಿರಬೇಕು. ಮನೆಯಲ್ಲಿ ದೇವರ ಮನೆಯು ಈಶಾನ್ಯ ವಲಯದಲ್ಲಿರಬೇಕು ಮತ್ತು ಅದನ್ನು ಗೃಹ ಪ್ರವೇಶದ ದಿನ ಸ್ಥಾಪಿಸಬೇಕು,” ಎಂದು ಪರ್ಮಾರ್ ಸಲಹೆ ನೀಡುತ್ತಾರೆ.

ಗೃಹ ಪ್ರವೇಶ ಸಮಾರಂಭವು ಸರಳ ಅಥವಾ ವಿಸ್ತಾರವಾದದ್ದಾಗಿರಬಹುದು, ಮನೆಯ ಮಾಲೀಕರ ಮೇಲೆ ಅವಲಂಬಿತವಾಗಿರುತ್ತದೆ. ಋಣಾತ್ಮಕ ಶಕ್ತಿಯಿಂದ ಜಾಗವನ್ನು ಶುಚಿಗೊಳಿಸಿ ಅದನ್ನು ಶುದ್ಧೀಕರಿಸಲು, ಸಾಮಾನ್ಯವಾಗಿ, ಒಂದು ಹವನವನ್ನು ಮಾಡಲಾಗುತ್ತದೆ. ಒಂದು ಗಣೇಶ ಪೂಜೆ, ನವಗ್ರಹ ಶಾಂತಿ, ಎಂದರೆ ಒಂಬತ್ತು ಗ್ರಹಗಳ ಪೂಜೆ ಮತ್ತು ಒಂದು ವಾಸ್ತು ಪೂಜೆಯನ್ನು ಸಾಧಾರಣವಾಗಿ ಮಾಡಲಾಗುತ್ತದೆ. ಅಂದಿನ ದಿನ ಕರೆದ, ಪಂಡಿತರಿಗೆ ಮತ್ತು ಪರಿವಾರದವರಿಗೆ ಮತ್ತು ಸ್ನೇಹಿತರಿಗೆ, ಊಟವನ್ನು ಕೂಡಾ ಬಡಿಸಬೇಕು. ಒಂದು ಬಾರಿ ಗೃಹ ಪ್ರವೇಶ ಸಮಾರಂಭವನ್ನು ಮಾಡಿದ ನಂತರ ಮಾಲೀಕರು ಹೊಸ ಮನೆಗೆ ವಾಸಿಸಲು ಹೋಗಬಹುದು.

 

ನಿಮ್ಮ ಹೊಸ ಮನೆಯ ಗೃಹ ಪ್ರವೇಶಕ್ಕೆ ಸಲಹೆಗಳು

 

Was this article useful?
  • 😃 (0)
  • 😐 (0)
  • 😔 (0)
Exit mobile version